ನಮ್ಮದು ಮಂಗಳೂರು ಒಳಗೆ ಒಂದು ಹಳ್ಳಿ .ಅಲ್ಲಿ ನಾನು ಅಣ್ಣ ,ಅಪ್ಪ ,ಅಮ್ಮ ಸಣ್ಣ ಕುಟುಂಬ .
ಆದ್ರೆ ನಮ್ಮ ಮನೆಲಿ ಟಿವಿ ಎಲ್ಲ ಎಂತ ಇರ್ಲಿಲ್ಲ ನಮಿಗೆ ಟಿವಿ ನೋಡ್ಬೇಕು ಅಂದ್ರೆ ನಾವು ಹತ್ರ ಇದ್ದ ಶೆಟ್ಟರ ಮನೆಗೆ ಹೋಗ್ತಾ ಇದ್ದೆವು ಅಲ್ಲಿ ಇದ್ದದ್ದು ಒಂದು colour ಟಿವಿ ಅದು ನಮಗೆ ನಮ್ಮ ಹತ್ರದ ಮನೆ ಮಕಳಿಗೆ ಎಲ್ಲ ಟಾಕಿಸ್ ಅಂದ್ರೆ ತಪಾಗ್ಲಿಕ್ಕೆ ಇಲ್ಲ .
ನಮ್ಮ ಮನೆಗಳಲ್ಲಿ ರೇಡಿಯೋ ಬರ್ತಾ ಇತ್ತು ಅಪ್ಪಯ್ಯ ರಾತ್ರಿ news ಕೇಳಲಿಕ್ಕೆ ಅದನ್ನ ಉಪಯೋಗಿಸ್ತ ಇದ್ರೂ ನಾವು ಮುಟಿದ್ರೆ ಬಾಸುಂಡೆ ಬರುವಹಾಗೆ ಬಿಳ್ತಾ ಇತ್ತು .ಯಾಕೆ ಅಂತ ಕೇಳಿದ್ರೆ bangalore ಇಂದ ತಂದದ್ದು ಇಲ್ಲಿ ಎಲ್ಲ ಸಿಗುದಿಲ್ಲ ಮಾರಾಯರೇ ಅಂತ ಇದ್ರು .
ನಮಗೆ ಕೆಲವೊಮ್ಮೆ ಈ ಅಪ್ಪಯ್ಯನ ರೇಡಿಯೋಕಿಂತ ಶೆಟ್ಟರ ಟಿವಿ ಒಳ್ಳೇದು ಅನ್ಸ್ತ ಇತ್ತು ಅದ್ರಲ್ಲಿ ಬರಿ ಸೌಂಡ್ ಅಲ್ಲ picture ಬರ್ತಾ ಇತ್ತು ಹೊಸ ಹೊಸ ದು ನೋಡ್ತಾ ಕನಸು ಕಾಣ್ತಾ ಇದ್ದೆವು .
ಕಾರುಗಳು ಅದ್ರ ಮೇಲೆ ಇದ್ದ ತರ ತರ ಹೆಸರು ನಮ್ಮನ್ನು ಯಾವಾಗ್ಲೂ ಕೆರಳ್ಹಿಸ್ತ ಇತ್ತು .ನಂಗು ಒಂದು ಕನಸು ಇತ್ತು ಅಪ್ಪಯ್ಯ ನಂತೆ ಒಮ್ಮೆ bangalore ಗೆ ಹೋಗಿ ಒಂದು colour colour pant shirt ತೆಕೊಂಡು ಕನ್ನಡಕ ಹಾಕೊಂಡು tv ಅಲ್ಲಿ ನೋಡಿದಂತ ಬೆಂಜ್ car ಒಂದು ತೆಕೊಂಡು ಅದ್ರಲ್ಲಿ ರೇಡಿಯೋ ಹಾಕೊಂಡು ಬರಬೇಕು ಅನ್ನುದು ..
ನಂಗೆ ಶಾಲೆ ಇರ್ಲಿಲ್ಲ ಬೆಳಿಗ್ಗೆ ಎಲ್ಲ ತೋಟದಲ್ಲಿ ಅಪ್ಪಯ್ಯಂಗೆ ಸಹಾಯ ಮಾಡ್ತಾ ಇದ್ದೆ .ಮಧ್ಯಾನ ಒಳ್ಳೆ ಗಂಜಿ ಊಟ ಸಂಜೆ ಆದ್ರೆ ಶೆಟ್ರ ಮನೆ ಟಿವಿ ರಾತ್ರಿ ಮನೆಯಲ್ಲಿ ಊಟ ನಿದ್ದ್ದೆ ಹೀಗೆ ದಿನಗಳು ಸಾಗ್ತಾ ಇತ್ತು .
ಪ್ರತಿದಿನ ಟಿವಿ ನೋಡ್ತಾ ನನ್ನ colourfull ವೇಷ ನೆನಪಿಸ್ಕೊಂಡು ಖುಶಿ ಆಗ್ತಾ ಇತ್ತು .ಆದ್ರೆ bangalore ತುಂಬಾ ದೊಡ್ಡದು ಅಂತ ಇದ್ದ ಅಪ್ಪಯ್ಯ ಅಲ್ಲಿ ಹೋಗಿ car ಎಲ್ಲ ತೆಕೊಂಡು ತರುದು ಹೇಗೆ ಇದು ನಂಗೆ ಸವಾಲೇ ಆಗಿತ್ತು ..??
ನಾನು ಅಪ್ಪಯ್ಯ ಹತ್ರ ಮಾತಾಡೋ ಹಾಗೆ ಇರ್ಲಿಲ್ಲ ಇದರ ಬಗ್ಗೆ. ಇನ್ನು ಚಿಗುರು ಮೀಸೆ ಬಂದಿರಲಿಲ್ಲ ಕಂಡಿತ ಬಾಸುಂಡೆ ಬರ್ತಾ ಇತ್ತು ಕೇಳಿದ್ರೆ …ಎಂತ ಮಾಡುದು ಎಷ್ಟು ದುಡ್ಡು ಬೇಕಾಗ್ಬೋದು ಎಂತ ಗೊತ್ತಿಲ್ಲ ಯಾರನ್ನು ಕೆಳುದು ..?
ಏನೇ ಇರ್ಲಿ first ದುಡ್ಡು ಹೊಂದ್ಸುವ ಅಂತ ಅಂದ್ಕೊಂಡು ಮಲಗಿದೆ .
ಶುರು ಆಯಿತು ಅಲ್ಲಿಂದ ದುಡ್ಡು ಹೊಂದ್ಸ್ಲಿಕ್ಕೆ ಎಲ್ಲ ಕೆಲಸ ಮಾಡುದು ಯಾವ ಕೆಲಸ ಬಿಡದೆ ಎಲ್ಲ ಮಾಡುದೆ ಇದು ಅದು ಇಲ್ಲ ,ಅಪ್ಪಯ್ಯ ನನ್ನ ಕಷ್ಟ ನೋಡಿ ಖುಷಿ ಪಟ್ಟ ಮಗ ಬೆಳದು ನಿಂತ ಅಂತ ..ಎಲ್ಲ ಕಡೆ ಹೇಳಿಕೊಂಡು ತಿರಗ್ತಾ ಇದ್ದ ..
ನಂಗೆ ಒಂದು car ಗೆ ಎಷ್ಟು ಬೇಕು ಅಂತ ಕೂಡ ಗೊತ್ತಿಲ್ಲ ಯಾರನ್ನು ಕೆಳುದು ಅಂತ ಚಿಂತೆ ..ದುಡ್ಡು ತುಂಬ್ತಾ ಇತ್ತು ಜೊತೆಗೆ ಚಿಂತೆ ಕೂಡ ಎಂತ ಮಾಡುದು ಹೇಗೆ ಬೆಂಜ್ ತರದು ತಂದರೆ ನಾನೆ first ಮನೆಗೆ ತಂದದು ಒಳ್ಳೆ ಗೌರವ ಛೆ ಯಾರದಾದರು ಕಾಲು ಹಿಡಿದು bangalore ಸೇರಬೇಕು ಅಂತ ನಿರ್ಧಾರ ಮಾಡಿದೆ ..ಆಗ ನೆನಪಿಗೆ ಬಂದದೆ ಈ ತುಳಸಿ ಊರಿಂದ ಓಡಿ ಹೋಗಿ bangalore ಅಲ್ಲಿ ಎಲ್ಲೋ ಇದ್ದ ಅಂತೆ ಎಲ್ಲಿ ಅಂತ ಯಾರಿಗೆ ಗೊತ್ತಿಲ್ಲ .
ಆದ್ರೆ ಅವನನ್ನು ಹೇಗೆ ಹುಡ್ಕ್ಲಿ ಅನ್ನುದು ದೊಡ್ಡ ಸಮಸ್ಯೆ ಆಗಿತ್ತು ..
ಕೆಲವರು ಹೇಳ್ತಾ ಇದ್ರು ಅವನು ತಿಂಗಳಿಗೊಮ್ಮೆ ಊರಿಗೆ ಬಂದು ಹೋಗ್ತಾನೆ ಅಂತ .ಹೌದು ನಂಗೆ ಹೊಳಿತು ಉಪಾಯ ಅವತಿಂದ ದಿನ ಬೆಳಿಗ್ಗೆ ಬಸ್ ಸ್ಟಾಪ್ಗೆ ಹೋಗುದು ಕಾಯುದು ಇವನಿಗೆ .
ಯಾವಾಗ ಬರ್ತಾನೆ ಎಂತ ಗೊತ್ತಿಲ್ಲ ಆದ್ರೆ ಕಾಯುದು ನಾನು ನಿಲ್ಸ್ಲಿಲ್ಲ ದಿನ ಹೋಗಿ ಅಲ್ಲೇ ಭಟ್ಟರ ಅಂಗಡಿಯಲ್ಲಿ ಒಂದು ಟೀ ಕುಡ್ದು ಮಾತಾಡ್ತಾ ನಿಲ್ಲುದೆ ಕಾಯಕ ಆಯಿತು ..
ದಿನಗಳು ಕಳೀತು ಆಸಾಮಿಯ ಪತ್ತೆ ಇಲ್ಲ ಮಾರಾಯ ಎಂತ ಮಾಡುದು ಎಲ್ಲಿ ಹುಡ್ಕುದು ನನ್ನ ಆಸೆ ಈ ಜನ್ಮಕ್ಕೆ ಆಗಲಿಕ್ಕೆ ಇಲ್ಲ ದೇವೆರೇ ಅಂತ ಬಸ್ ಸ್ಟಾಂಡ್ ಇಂದ ಹೊರಡುವಾಗ ಭರ್ರ್ ನೆ ದೂಳು ಎಬ್ಬಿಸ್ತ ಬಂತು ಕೆಂಪು ಬಿಳಿ ಬಸ್ಸು .
ಬಸ್ಸು ಕಂಡ ತಕ್ಷಣ ಅನ್ಕೊಂಡೆ ಬೇವರ್ಸಿ ತುಳಸಿ ಇದ್ರಲ್ಲಿ ಆದರು ಇರು ಮಾರಾಯ ಅಂತ .
ನನ್ನ ಕೂಗು ದೇವೆರಿಗೆ ಕೇಳಿತ್ತು ಅಂತ ಕಾಣ್ತು ಕೊನೆಗು dark ಕೆಂಪು ಶರ್ಟ್ ಅದಕ್ಕೆ ಒಪ್ಪುವಷ್ಟೇ ಹಳದಿ ಬಣ್ಣದ ಪ್ಯಾಂಟ್ ಒಂದು ದೊಡ್ಡ ಪಿಂಕು ಕನ್ನಡಕ ತಲೆಗಿಂತ ಸ್ವಲ್ಪ ದೊಡ್ಡದು ಅನ್ನಬೋದು ಒಂದು ರೌಂಡು ಟೊಪ್ಪಿ ಕಾಲಲ್ಲಿ ಒಂದು ಕಂದು ಬಣ್ಣದ ದೊಡ್ಡ shoe ಹಾಕೊಂಡು ಕೈಯಲ್ಲಿ ಬಣ್ಣ ಬಣ್ಣ ದ ಒಂದು ಬ್ಯಾಗ್ ಹಿಡ್ದು ಇಳ್ದೆ ಬಿಟ್ಟ ತುಳಸಿ ..
ನಾವೆಲ್ಲಾ ಅವನ ವೇಷ ನೋಡ್ತಾ ಹಾಗೆ ಬಾಯಿ ಬಿಟ್ಟು ನಿಂತಿದ್ದೆವು ಅವನು ಭಟ್ರ ಹೋಟೆಲ್ಗೆ ಬಂದು ಇಂಗ್ಲಿಷ್ ಅಲ್ಲಿ ಅದೇನೋ ಒನ್ butter milk ಅಂತ ಕೇಳಿದ ನಮ್ಮ ಭಟ್ರು ಒಂದು butter ಮತ್ತೆ ಹಾಲು ಕೊಟ್ರು (butter ಅಂದ್ರೆ kind of biscut )
ತುಳಸಿ ಭಟ್ರಿಗೆ ಏನೋ ಅಂದು ಕನ್ನದಲ್ಲಿ ಮಜ್ಜಿಗೆ ಕೇಳಿ ಕುಡ್ದ ಆಮೇಲೆ ನನ್ನ ಕಡೆ ತಿರ್ಗಿ hw r u ಅಂದ ನನಗೋ ಇಂಗ್ಲಿಷ್ ನ ಕುಂಡೆ ಬಾಯಿ ಗೊತ್ತಿಲ್ಲ ಹಾ ಅಂತ ಪೆಚ್ಚಾಗಿ ನಕ್ಕೆ .
ತುಳಸಿ ಬಂದು bangalore ವರ್ಣನೆ ಶುರು ಮಾಡಿದ ಹಾಗೆ ಇರತ್ತೆ ,ಹೀಗೆ ಇರತ್ತೆ ನೀನು ನೋಡಿದ್ರೆ ಅಷ್ಟೇ ಮಾರಾಯ ಅಂತ ಎಲ್ಲ ನನ್ನ ಆಸೆ ಇನ್ನು ಜಾಸ್ತಿ ಮಾಡಿದ ನನಗೋ ಫಸ್ಟ್ ಇತ್ತು ಹೋಗ್ಬೇಕು ಅಂತ ಈಗ ಇನ್ನು ಜಾಸ್ತಿ ಆಗಿ ಮನಸ್ಸು ಕುಣಿಲಿಕ್ಕೆ ಶುರು ಆಯಿತು ಛೆ ಹೇಗೆ ಆದರು ಮಾಡಿ ಈ ಸಲ ಇವನ ಒಟ್ಟಿಗೆ bangalore ಗೆ ಹೋಗ್ಬೇಕು ಮಾರಾಯ ….
ಸರಿ ದಾರಿ ಉದ್ದಕ್ಕೂ ಹರಟ್ತ ಹೊರಟೆವು ಹಾಗೆ ನಾನು ನನ್ನ ಆಸೆ ಹೇಳಿದೆ ಹೀಗೆ ಬರಬೇಕು ಅಂತ ಎಲ್ಲ ಇದೆ ಒಂದು 30,000 ಕೂಡಿಸಿದೇನೆ ಮಾರಾಯ ಕರ್ಕೊಂಡು ಹೋಗು ಅಂತ ..
ತುಳಸಿ ನಿಂತು ಏನೋ ಯೋಚನೆ ಮಾಡಿ ಬೆಂಜ್ ಬೇಕಲ್ಲ ಸಿಗ್ತದ ಒಳ್ಳೆ ಗಾಡಿ ಕೊಟ್ಟು ಕಳಿಸ್ತೇನೆ ಅಂತ ಹೇಳಿದ .ನನಗೋ ಖುಷಿ ನನ್ನ ಕನಸು ಇಸ್ತ್ರಲ್ಲೇ ನಿಜ ಆಗಲಿಕ್ಕೆ ಇತ್ತು ..ಆ ಕ್ಷಣಕ್ಕೆ ತುಳಸಿ ದೇವರಂತೆ ಕಂಡ ಕಣ್ಣಿಗೆ . ಸರಿ ಮನೆಗೆ ಹೋಗಿ ಅಪ್ಪಯ್ಯ ಹತ್ರ ಎಲ್ಲ ಹೇಳಿದೆ bangalore ಗೆ ಹೋಗಿ ಬರ್ತೇನೆ ಅಂತ . ಕಾರನ ಬಗೆ ಹೇಳಲಿಲ್ಲ .
ರಾತ್ರಿ ಪೂರ್ತಿ ನಿದ್ದೆ ಇಲ್ಲ ನಾನು ಬೆಂಗಳೂರು ಇಂದ ಕಾರಲ್ಲಿ ಬರುದು ಇಲ್ಲಿ ಊರೆಲ್ಲ ಸುತ್ತುದು ಎಲ್ಲ ಕೆಳುದು ರೇಡಿಯೋ ಉಂಟಾ ಅಂತ ನಾನು ಹಾಕಿ ತೊರ್ಸುದು ಹೀಗೆ ರಾತ್ರಿ ಎಲ್ಲ ಕನಸಲ್ಲೇ ಕಳದೆ .
ಹಾಗೋ ಹೇಗೊ ಬೆಳಿಗ್ಗೆ ಆಯಿತು ನಾನು ಎದ್ದು ಎಲ್ಲ ಕೆಲಸ ಬೇಗ ಮುಗಿಸಿ ಬಸ್ ಸ್ಟಾಪ್ ಗೆ ಓಡಿದೆ …
ತುಳಸಿ ರೆಡಿ ಆಗಿ ನಿಂತಿದ್ದ ಸರಿ ಇಬ್ರು ಬಸ್ಸು ಹತ್ತಿ ಹೊರಟೆವು ನಂಗೆ ಒಳಗೆ ಒಳಗೆ ಖುಷಿ ಖುಷಿ ಅಲ್ಲಿ ಯಾವಗ ನಿದ್ದೆ ಬಂತೋ ತುಳಸಿ bangalore ಬಂತು ಅಂತ ಹೇಳಿದಾಗಲೇ ಎಚ್ಚರ ಆದದು .
ಎದ್ದು ನೋಡಿದ್ರೆ ಎಷ್ಟು ದೊಡ್ಡ ಜಾಗದಲಿ ಪೂರ್ತಿ ಬಸ್ಸುಗಳು ಅದು ಕೆಂಪೇಗೌಡ ಬಸ್ ನಿಲ್ದಾಣ ಅಂತೆ ತುಳಸಿ ಸಮಜಾಯಿಷಿ ನೀಡಿದ . ಜನ ಅಬ್ಬ ಕಣ್ಣೆದುರು ಟಿವಿ ಓಡಿದ ಹಾಗೆ ಇತ್ತು ನಂಗೆ ..ತುಳಸಿ ಅಂದ ಇವತ್ತು ಎಲ್ಲ ತೆಕೊಂಡು ನಾಳೆ ವಾಪಸು ಹೋಗುವ ಅಂತ ಸರಿ ಅಂದೆ.
colour colour ಶರ್ಟ್ ಪ್ಯಾಂಟ್ ಎಲ್ಲ ಆಯಿತು .ಹಾಕೊಂಡು ಕಾರು ನೋಡ್ಲಿಕ್ಕ್ಕೆ ತುಳಸಿಯಾ ಫ್ರೆಂಡ್ನ ಅಂಗಡಿಗೆ ಹೋದೆವು ಒಳ್ಳೆ ಗಾಡಿಗಳು ಇತ್ತು ನಂಗೆ ಹೆಸರು ಕೂಡ ಗೊತ್ತಿಲ್ಲ ಆದ್ರೆ ಬೆಂಜ್ ಗಾಡಿಯಾ ಮೇಲೆ ಮಾರ್ಕ್ ಇರತ್ತೆ ಚಕ್ರದ್ದು ಅಂತ ಯಾರೋ ಹೇಳಿದ್ರು ಅದನ್ನ ಹುಡ್ಕ್ತ ಹೋದೆ ಕೊನೆಗು ಮೂಲೆ ಅಲ್ಲಿ ಕಾಣ್ತು ನನ್ನ ಕಾರು .ತುಳಸಿ ಹೇಳಿದ ನೀನು ಹೇಳಿದ ಕೂಡ್ಲೇ ಇದು ಬುಕ್ ಮಾಡ್ಸಿದೆ ಅಂತ ತುಳಸಿ ದೇವೇರ ಅಪರಾವತವಾಗಿ ಕಂಡ .ಕಾರು ತಂದು ಹೊರಗೆ ಕೊಟ್ಟು ನಾನ್ನ ಕೈ ಇಂದ ಬೆರಳಚ್ಚು ಎಲ್ಲ ತೆಗೊನ್ದರು ಅದೇನೋ ಮನೆಗೆ ಕಲ್ಸಿತೇವೆ ಅಂದ್ರು ಅದ್ಯಾವ್ದು ನಂಗೆ ಬೇಕಾಗಿ ಇರ್ಲಿಲ್ಲ ಕಾರು ಬಂದದೆ ಕುಶಿ ಆಗಿತ್ತು ..
ಈಗ ಇದ್ದ ಸಮಸ್ಯೆ ನಂಗೆ ಗಾಡಿ ಓಡ್ಸ್ಲಿಕ್ಕೆ ಬರ್ತಾ ಇರ್ಲಿಲ್ಲ ಎಂತ ಮಾಡುದು ತುಳಸಿಗೆ ಓಡ್ಸ್ಲಿಕ್ಕೆ ಬರ್ತದೆ ಅಂತ ಅವನು ಕರ್ಕೊಂಡ್ ಹೋಗ್ತೇನೆ ಅಂದ ಎಲ್ಲ ಸೂತ್ತಿ ರಾತ್ರಿ ಕಾರಲ್ಲೇ ಮಲಗಿದ್ದು ಆಯಿತು 10000 ತುಳಸಿ ಕೊಟ್ಟ ಅಂತೆ ಊರು ಮುಟ್ಟಿದ ಕೂಡ್ಲೇ ಕೊಡ್ತೇನೆ ಅಂದೆ .
ಮರುದಿನ ಊರಿಗೆ ಹೊರಟೆವು ಊರಲ್ಲಿ ಎಲ್ಲ ನೋಡುದೆ ನೋಡುದು ಕಾರಲ್ಲಿ ದೊಡ್ದಕ್ಕ್ಕೆ ಸೌಂಡ್ ಕೊಟ್ಟು ರೇಡಿಯೋ ಹಾಕಿ ನಾವು ಹೋಗುದು ಸರಿ ಆಗಿ ಇತ್ತು . ನಮ್ಮ ಮನೆ ಮುಂದೆ ಕಾರು ನಿಲ್ತು ಅಪ್ಪಯ್ಯ ಯಾರು ಅಂತ ನೋಡ್ತಾ ಇದ್ರು ನನ್ನ ವೇಷ ಅವರಿಗೆ ಗೊತಾಗ್ಲಿಲ್ಲ ಆದ್ರೆ ಗೊತಾದ್ ಮೇಲೆ ಖುಷಿ ಪಟ್ರು ಹೀಗೆ ದಿನ ಕಳೀತು .
ತುಳಸಿಗೆ ದುಡ್ಡು ಕೊಟ್ಟು ಕಳ್ಸಿದೆ .
ದಿನ ಕಳೀತು ನಂಗೆ ಕಾರು ಓಡ್ಸುದು ಬರಲೇ ಇಲ್ಲ ಕಾರು ನಿಂತಲ್ಲೇ ನಿಂತು ದೂಳು ಹಿಡಿಲಿಕ್ಕೆ ಶುರು ಆಯಿತು .
ರೇಡಿಯೋ ಕೂಡ ನಿಂತು ಹೋಯಿತು ಅದೇನೋ battery ಮುಗಿತು ಅಂತೆ bangalore ಇಂದ ತರಲಿಕ್ಕೆ ಹೇಳಿದ್ರು ನಾನು ಹೋಗಲೇ ಇಲ್ಲ .
ಜನಕ್ಕೆ ಕಾರು normal ಆಯಿತು ನಂಗೆ ಮದುವೆ ಆಯಿತು ಮಕ್ಕಳೈತು ಮಕ್ಳು ಕಲ್ತು ಕಾರು ಮನೆ ಎಲ್ಲ ಮಾಡಿದ್ರು . ಬೆಂಜ್ ಕಾರು ಮಾತ್ರ ಅಲ್ಲೇ ನಿಂತಿತ್ತು ಆದ್ರೆ ಈಗಲೂ ಬಡ್ಡಿ ಮಗ ತುಳಸಿಯನ್ನು ಹುಡ್ಕ್ತ ಇದೇನೇ ಮಾರಾಯ ಅಲ್ಲ ನಾನು ಕೇಳಿದ್ದು ಬೆಂಜ್ ಅನ್ನು ಅವನು ಯಾವ್ದೋ ಬೇರೆ ಕಾರ ಕೊಡ್ಸಿ ಬೆಂಜ್ ಚಕ್ರ ಅಂಟಿಸಿದ್ದು ಅಲ್ಲದೆ 10000 ಬೇರೆ ತೆಕೊಂಡು ನನ್ನ ಬಕ್ರ ಮಾಡಿ ಹೋಗಿದ್ದ ಈಗಲೂ ಮಕ್ಳು ನನ್ನ ಕತೆ ಕೇಳಿ ನಗ್ತಾರೆ ಅಪ್ಪಯ್ಯನ ಬೆಂಜ್ ಅಂತ ಅದ್ರಲ್ಲಿ ಬರ್ದ್ ಕೂಡ ಇಟ್ಟಿದಾರೆ ಕರ್ಮ ಮಾರಾಯ .